ನಟ ಯಶ್ ತಂದೆತಾಯಿ ಗ್ರಾಮಸ್ಥರ ನಡುವೆ ಹಾಸನದಲ್ಲಿ ರಸ್ತೆ ನಿರ್ಮಾಣಕ್ಕಾಗಿ ಗಲಾಟೆ | Janata news
ಹಾಸನ : ಸ್ಯಾಂಡಲ್ವುಡ್ ರಾಕಿ ಭಾಯ್, ರಾಕಿಂಗ್ ಸ್ಟಾರ್ ಯಶ್ ತಂದೆ-ತಾಯಿ ಜೊತೆ ಗ್ರಾಮಸ್ಥರು ಜಗಳಕ್ಕೆ ಇಳಿದಿರುವ ಘಟನೆ ಹಾಸನದಲ್ಲಿ ನಡೆದಿದೆ.
ಯಶ್ ದುದ್ದ ಹೋಬಳಿ ತಿಮ್ಮೇನಹಳ್ಳಿ ಸಮೀಪ ಭೂಮಿ ಖರೀದಿಸಿದ್ದಾರೆ. ಇಂದು ಅವರ ತಂದೆ ಅರುಣ್ ಕುಮಾರ್, ತಾಯಿ ಪುಷ್ಪ ಅವರೊಂದಿಗೆ ನಾಲ್ಕೈದು ಮಂದಿ ಯುವಕರು ಜೆಸಿಬಿಯೊಂದಿಗೆ ಜಮೀನಿನ ಬಳಿ ತೆರಳಿದ್ದರು.
ಯಶ್ ತಂದೆ ಅರುಣ್ಕುಮಾರ್, ತಾಯಿ ಪುಷ್ಪ ಅವರು ತಮ್ಮ ಜಮೀನ ಕೆಲಸ ಮಾಡುತ್ತಿದ್ದ ವೇಳೇಯಲ್ಲಿ ಸ್ಥಳಕ್ಕೆ ಆಗಮಿಸಿದ್ದ ಗ್ರಾಮಸ್ಥರು ಇಲ್ಲಿ ಕೆಲಸ ಮಾಡದಂತೆ ತಡೆ ನೀಡಿದ್ದಾರೆ ಎನ್ನಲಾಗಿದ್ದು, ನಾವು ಓಡಾಡಲು ಮೊದಲು ದಾರಿ ಬಿಡಿ ಎಂದು ಯಶ್ ಪೋಷಕರೊಂದಿಗೆ ವಾಗ್ವಾದ ನಡೆಸಿದ್ದಾರೆ. ಘಟನೆ ನಡೆದ ಜಾಗದಲ್ಲಿ ಕೆಲವು ಸಮಯಗಳ ಕಾಲ ವಾಗ್ವಾದ ಕೂಡ ನಡೆದಿದೆ ಎನ್ನಲಾಗಿದೆ.
ಮಾತಿಗೆ ಮಾತು ಬೆಳೆದು ಗ್ರಾಮಸ್ಥರು ಮತ್ತು ಕೆಲ ರಾಕಿಂಗ್ ಸ್ಟಾರ್ ಯಶ್ ಬೆಂಬಲಿಗರು ಕೈ ಕೈ ಮಿಲಾಯಿಸಿದ್ದಾರೆ. ಬಳಿಕ ಸ್ಥಳಕ್ಕೆ ದುದ್ದ ಪೊಲೀಸರು ಭೇಟಿ ನೀಡಿದ್ದು ಮಧ್ಯಸ್ಥಿಕೆಯಿಂದ ಸಮಸ್ಯೆ ಬಗೆಹರಿದಿದೆ.